ಶರಣು ಸಾಯಿನಾಥ


ಸಾಯಿಗೀತೆ - 
ರಚನೆ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು 
ಶರಣು ಸಾಯಿನಾಥ - ತ್ರಿವುಡೆ ತಾಳ 
ರಾಗ: ಹಂಸಾನಂದಿ

ಶರಣು ಶಿರಡೀನಾಥ ದೇವಗೆ ನಮಿಪೆ ಮಂಗಳಮೂರ್ತಿಯೇ
ಶರಣು ಸದ್ಗುರು ಭಯವಿನಾಶಗೆ ನಮೋ ಎನ್ನುವೆ ದೀಪವೇ
ಶರಣು ದ್ವಾರಕಮಯಿ ಸುಲೋಚನ ಸತ್ಯದರ್ಶಕ ಶಕ್ತಿಯೇ
ಶರಣು ದತ್ತವತಾರಿರೂಪನೆ ನಮೋ ಎನ್ನುವೆ ದೀಪವೇ ||೧||

ದೋಷ ಕಳೆದೆಮಗೊಂದು ಸದ್ಗತಿ ತೋಷದಲಿ ಕೊಡು ನಾಥನೇ
ಕ್ಲೇಶ ತಡೆಯುತ ಹರಸು ಭಕ್ತರ ಬಿಡದೆ ನಿನ್ನನು ನಂಬುವೆ
ಶೇಷಶಯನನೆ ನೀಡು ಸನ್ಮತಿ ಪೋಷಿಸುತ್ತಲಿ ದೇವನೇ
ಕೇಶವನು ನೀ ಈಶನೂ ನೀ ನೀನೆ ಸಕಲವು ಎನ್ನುವೆ ||೨||

ಹರುಷದಲಿ ಕೊಂಡಾಡುತಲಿ ನಾ ಹರಿಸುವೆನು ಮನ ನಿನ್ನಲೀ
ವರರಥದಲಿ ನಾ ನಿನ್ನ ಕೂರಿಸಿ ಸಾಗುವೆನು ಅತಿ ಹರುಷದಿ
ನಿರತ ಕೀರ್ತನೆ ನಿನ್ನ ಸೇವನೆ ಧರಿಪೆ ನಾಮವ ಭಕುತಿಲೀ
ಕರದಿ ಅಭಯವ ನೀಡು ದೇವನೆ ತಾಯಿ ತಂದೆಯ ರೂಪದಿ ||೩||

ಸಾಯಿನಾಥನೆ ಜಯತು ಜಯಜಯ ಮಾಯೆಯಲಿ ನೀ ನಿಲುವೆಯಾ
ನ್ಯಾಯಮೂರುತಿ ಸತ್ಯ ಸಾರಥಿ ಸಚ್ಚಿದಾನಂತನಂತನೇ
ಸಾಯಿ ಶ್ರೀಸುತ ನಿನ್ನ ಮಹಿಮೆಯ ಜೀಯ ಪೊಗಳುವೆ ಬರುವೆಯಾ
ಸಾಯಿ ಶಿರಡೀ ಸಾಯಿಬಾಬನೆ ಕರುಣಿಸತ್ಪರಿಪಾಲನೇ ||೪||

-ಶ್ರೀಸುತ

Photo Credit: shirdisaibabaexperiences

Please share and support me

2 comments:

  1. ಸೂಪರ್ ಕವನ....😍

    ReplyDelete
  2. ಧನ್ಯವಾದಗಳು ಪಂಕಜಾ ಮೇಡಮ್

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.