ವಂದಿಸುವೆ ಗುರು
ನಿನ್ನ ಚರಣ ಕಮಲಕ್ಕೆ
ಕಟುಕರ ಕೈ ಸೇರುತಿದ್ದ
ಗೋವುಗಳ ಕಾಯ್ದೆ
ನೀನು ಕೃಷ್ಣನಂತೆ
ಶ್ರೀ ರಾಮನಾದರ್ಶವನು
ಜನ ಮನದಲ್ಲಿ ಬಿತ್ತಿದೆ ನೀ
ರಾಮಕಥೆಯೆಂಬ
ಕಥಾಮೃತ ಸಾರವನುಸುರಿ
ನೀ ಕಟ್ಟಿಸಿದೆ
ವಿದ್ಯಾಮಂದಿರಗಳ
ಪ್ರತಿಯೊಬ್ಬರ ವಿದ್ಯೆಗೆ
ಅನುಕೂಲವಾಗಲೆಂದು
ನಿತ್ಯವೂ ನೀ ಮಾಡುತಿರುವೆ
ಲೋಕದೊಳಿತನ್ನು
ನಿನ್ನ ಕೀರ್ತಿಯು ಜಗದಗಲ
ಹರಡುವುದ ಕಂಡು
ಸಹಿಸಲಾರದೆಯೇ
ಬಗೆ ಬಗೆಯ ಕಿರುಕುಳವ
ಕೊಡುತಲಿದ್ದರೂ ಕೂಡ
ನೀ ಕ್ಷಮಿಸಿದೆಯವರನ್ನು
ವಾಸುದೇವನಂತೆ
ಸತ್ಯದ ದಾರಿಯಲಿ
ನಡೆಯುತಿರುವ ನಿನಗೆ
ಶ್ರೀರಾಮ ರಕ್ಷೆಯಿರಲು
ಯಾರೇನು ಮಾಡುವರು
ಯಾರಿಂದಲೇನಹುದು
ದಿನ ದಿನಕೆ ಎಲ್ಲ
ಮಿಥ್ಯಾರೋಪಗಳ
ಕಳೆದು ನೀ ಪ್ರಕಾಶಿಸಿದೆ
ಸೂರ್ಯನಂತೆ
ಶರಣೆಂಬೆ ನಿನಗೆ
ನಿನ್ನ ಪಾದಕಮಲಕ್ಕೆ
ತೋರು ನೀ ನಮಗೆಲ್ಲ
ಮುಕ್ತಿ ಮಾರ್ಗವನು
ನಿನ್ನ ಕೃಪಾ ಛತ್ರದಲಿ
ನಮ್ಮನಿಟ್ಟು ಕಾಯು
ನೀ ತಂದೆ
-ಶ್ರೀಮತಿ ಪಂಕಜಾ ರಾಮಭಟ್
Photo Credit: Hare Rama


No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.