ಎಲ್ಲ ಕಹಿ ಘಟನೆಗಳೂ ಕಾಲ
ಗರ್ಭದೊಳಗಡಗಿ ಸಹಜತೆಯನ್ನು ಮರೆತಂತೆ
ಕಾಣುತ್ತಿವೆ.
ಆಗಿರುವ ಘಟನೆಗಳಿಗೆ ಕಾಲವೇ ಸಾಕ್ಷಿ ಎಂಬಂತೆ ಉತ್ತರಕ್ಕಾಗಿ ಕಾಲವೂ ಕೂಡ ಕಾಯುತ್ತಿದೆ.
ಉಸಿರಲ್ಲು ಉಸಿರಾಗಿ ಕಾಯುತಿದ್ದವರೆಲ್ಲ ಉಸಿರನ್ನೇ
ಕೊಂದು ನಿಂತಂತನಿಸುತ್ತಿದೆ.
ಉಸಿರ ಹಿಡಿವ ಕೆಲಸವೂ
ನನ್ನಿಂದೆನ್ನುವುದಲ್ಲವೆಂಬುವುದು ಮನುಜಗೆ ಗೊತ್ತಿಲ್ಲವೆಂದನಿಸುತ್ತಿದೆ.
ಘಟನೆಗಳ ಮಹಾ ಪೂರ ನಮ್ಮೊಳಗಡಗಿ ನಾನು ನೀನೆಂಬ ನನದೆಂಬ ಭೇದ ತೋರುತ್ತಿದೆ.
ಸಾವೇ ಸಾಕ್ಷಿಯಾಗಿ ಕಾಯ್ದು
ಕುಳಿತಿರುವಾಗ ನನ್ನೆದೆಯು
ನಿನ್ನೆದೆಯು ಯಾಕಿಹುದು ಎನ್ನುತ್ತಿದೆ.
ನಾನಿಲ್ಲದಿದ್ದರೂ ನೀನಿರುವೆಯಲ್ಲ ಎಂಬುವುದೇ
ಈ ನಾಟಕದಂತ್ಯವೆಂದು ಹೇಳುತ್ತಿದೆ.
ನಾನು ನಾನೆಂಬ ಮೋಹವಳಿಯದೆ ಇಲ್ಲಿ ಯಾರಿಗಾರಿಲ್ಲವೆಂದು ತೋರುತ್ತಿದೆ.
ಸಾವೆಂಬುದು ಸಹಜ ಸಾವಲ್ಲವದು ಅಹಂಕಾರದಳಿವಿನಾ ಸಾವೆಂದು ಅನಿಸುತ್ತಿದೆ.
ಅಹಂಕಾರವಡಗಿದ ಗರ್ಭದೊಳು ಅದಾವ ಸಾವು
ಹತ್ತಿರ ಬಂದರೂ ಅದು
ಸಾವಲ್ಲವರಿವೆಂದು ಸಾಗುತ್ತಿದೆ.
-ಶಾಂತ ಶಕುಂತಲಾ ಕುಂಟಿನಿ
Photo Credit: fizd.com

ಹೆಸರು : ಶ್ರೀಮತಿ ಶಾಂತ ಕುಂಟಿನಿ
▪ಶ್ರೀಮತಿ ಶಾಂತ ಕುಂಟಿನಿಯವರು ಪುತ್ತೂರಿನವರು. ಸಾಹಿತಿ, ಕವಯಿತ್ರಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ತಮ್ಮದೇ ಆದ ಕೆಟರಿಂಗ್, ಮದುವೆ ಹಾಲ್ ಹಾಗೂ ಸಭಾಭವನಗಳನ್ನು ಹೊಂದಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಪ್ರಸ್ತುತ 'ಪುತ್ತೂರು ಸಾಹಿತ್ಯ ವೇದಿಕೆ'ಯ ಕಾರ್ಯದರ್ಶಿಯಾಗಿರುತ್ತಾರೆ. ಸತ್ಯ ಶಾಂತ ಪ್ರೊಡಕ್ಷನ್ಸ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದು ಈಗಾಗಲೇ ಇವರ "ಜೈ ಭಾರತ", "ಜೈ ಗೋಮಾತಾ", "ಕನ್ನಡದ ರಾಜ್ಯೋತ್ಸವ ನಮ್ಮದಮ್ಮ" ಎಂಬ 3 ಹಾಡುಗಳು ಅನಾವರಣಗೊಂಡಿದೆ.
ಪ್ರಕಟಗೊಂಡ ಕೃತಿಗಳು:
೧.ಸತ್ಯ ಶೋಧನೆ
೨.ಸಾಕ್ಷಾತ್ಕಾರ
೩.ಸಂಸಾರವನ್ನು(ಸಂಸಾರ ಅನ್ನೋ)ತೆರೆ
೪.ಸಮರ್ಪಣೆ
೫.ಸೂಕ್ಷ್ಮ ದೃಷ್ಟಿ
▪ಶ್ರೀಮತಿ ಶಾಂತ ಕುಂಟಿನಿಯವರು ಪುತ್ತೂರಿನವರು. ಸಾಹಿತಿ, ಕವಯಿತ್ರಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ತಮ್ಮದೇ ಆದ ಕೆಟರಿಂಗ್, ಮದುವೆ ಹಾಲ್ ಹಾಗೂ ಸಭಾಭವನಗಳನ್ನು ಹೊಂದಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಪ್ರಸ್ತುತ 'ಪುತ್ತೂರು ಸಾಹಿತ್ಯ ವೇದಿಕೆ'ಯ ಕಾರ್ಯದರ್ಶಿಯಾಗಿರುತ್ತಾರೆ. ಸತ್ಯ ಶಾಂತ ಪ್ರೊಡಕ್ಷನ್ಸ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದು ಈಗಾಗಲೇ ಇವರ "ಜೈ ಭಾರತ", "ಜೈ ಗೋಮಾತಾ", "ಕನ್ನಡದ ರಾಜ್ಯೋತ್ಸವ ನಮ್ಮದಮ್ಮ" ಎಂಬ 3 ಹಾಡುಗಳು ಅನಾವರಣಗೊಂಡಿದೆ.
ಪ್ರಕಟಗೊಂಡ ಕೃತಿಗಳು:
೧.ಸತ್ಯ ಶೋಧನೆ
೨.ಸಾಕ್ಷಾತ್ಕಾರ
೩.ಸಂಸಾರವನ್ನು(ಸಂಸಾರ ಅನ್ನೋ)ತೆರೆ
೪.ಸಮರ್ಪಣೆ
೫.ಸೂಕ್ಷ್ಮ ದೃಷ್ಟಿ













