ಸಿದ್ಧರಾಗಿ...


ಬದುಕಲು ಕಲಿಯಿರಿ
ಆದರೆ ಸಾವು ಕಾದಿದೆ
ಎಂಬ ಸತ್ಯವ ಮರೆಯದಿರಿ
ಬಾಳಲ್ಲಿ ಒಳಿತ ಸಾಧಿಸಬೇಕಿದೆ

ಕಣ್ಣೆದುರೇ ಸಾವ ಕಂಡರೂ
ತಾನು ಶಾಶ್ವತ ಎಂದು ಭಾವಿಸುವರು
ಮರಣ ಹತ್ತಿರ ಹೊಂಚು ಹಾಕುತಿದೆ
ಇದನರಿತು ಕ್ಷಣ ಕ್ಷಣ ಬಾಳಬೇಕಿದೆ

ಧನಕನಕ ಕೊಂಡೊಯ್ಯಲೇನಿಲ್ಲ
ಉಳಿವುದು ನಮ್ಮ ಸತ್ಸಾಧನೆಗಳೆಲ್ಲ
ಬದುಕು ಕ್ಷಣ ಭಂಗುರ
ಕೆಸುವಿನೆಲೆಯ ಮೇಲಿನ ನೀರ
ನಂಬದಿರು ಮಾನವ ನೀನು
ಎದೆ ನಿಂತಾಗ ನೀರ ಮೇಲಿನ ಮೀನು!

-ಗುಣಾಜೆ ರಾಮಚಂದ್ರ ಭಟ್

Photo Credit: meaningfullife.com

Author image
About the Author

ಹೆಸರು : ಶ್ರೀ ಗುಣಾಜೆ ರಾಮಚಂದ್ರ ಭಟ್.
▪ಶ್ರೀಯುತರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ಈಗ ಸಾಹಿತ್ಯದೊಂದಿಗೆ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.
ಅದಲ್ಲದೆ ಚುಟುಕ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಸದಸ್ಯರಾಗಿರುವ ಇವರು 2014 ರಲ್ಲಿ "ಎದೆಯ ದನಿ" ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದರ 300 ಪ್ರತಿಗಳನ್ನು ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯು ಆಯ್ಕೆ ಮಾಡಿಕೊಂಡುದು ಇವರ ಹಿರಿಮೆಗೊಂದು ಗರಿ. ಅತ್ಯುತ್ತಮ ಶಿಕ್ಷಕರಾಗಿದ್ದ ಇವರು 2014ನೇ ಸಾಲಿನ ದಕ್ಷಿಣಕನ್ನಡ ಜಿಲ್ಲಾ ಮಟ್ಟದ "ಅತ್ಯುತ್ತಮ ಜಿಲ್ಲಾ ಶಿಕ್ಷಕ" ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಕವಿಗೊಷ್ಟಿಗಳಲ್ಲಿ ಭಾಗವಹಿಸಿರುವ ರಾಮಚಂದ್ರ ಭಟ್ಟರು ಕನ್ನಡ, ಹವಿಗನ್ನಡ ಹಾಗೂ ತುಳು ಭಾಷೆಗಳಲ್ಲಿ ತಮ್ಮದೇ ಶೈಲಿಯ ಸಾಹಿತ್ಯ ಸಿಂಚನವನ್ನು ಪಸರಿಸುತ್ತಿದ್ದಾರೆ.
ಇದೀಗ ನಮ್ಮ ಈ ಜಾಲದಲ್ಲಿ "ಗುಣಾಜೆ ಚಂದ್ರಮ" ಎಂಬ ಹೆಸರಿನಲ್ಲಿ ಅವರ ಚುಟುಕಗಳನ್ನು ನೀವು ಓದಬಹುದು...
ವಿಳಾಸ:
ಕವನ ಸದನ
ದೇರಳಕಟ್ಟೆ ಅಂಚೆ
ಬೆಲ್ಮ ಗ್ರಾಮ
ಮಂಗಳೂರು ತಾಲೂಕು
ದ.ಕ 575018
ದೂರವಾಣಿ : +919743902522

Please share and support me

2 comments:

  1. ಅತ್ಯುತ್ತಮ 🙂

    ReplyDelete
    Replies
    1. ಧನ್ಯವಾದಗಳು ಮೆಚ್ಚುಗೆಯ ನುಡಿಗಾಗಿ....

      Delete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.